ಶಿವಮೊಗ್ಗದಲ್ಲಿ ಪೇಜಾವರ ಶ್ರೀಗಳ ಸಂಸ್ಮರಣೆ ಕಾರ್ಯಕ್ರಮ - Remembrance program of Pejavara sri in Shimoga
ಶಿವಮೊಗ್ಗ: ನಗರದ ಶ್ರೀಗಂಧ ಸಂಸ್ಥೆಯ ವತಿಯಿಂದ ವಿಶ್ವವಂದ್ಯ ಶ್ರೀ ವಿಶ್ವೇಶ ತೀರ್ಥ ಶ್ರೀಗಳ ಸಂಸ್ಮರಣೆ ಕಾರ್ಯಕ್ರಮವನ್ನು ದ್ವಾರಕ ಕನ್ವೆನ್ಷನ್ ಹಾಲ್ನಲ್ಲಿ ಶನಿವಾರ ಆಯೋಜಿಸಲಾಗಿತ್ತು. ಸಚಿವ ಕೆ.ಎಸ್ ಈಶ್ವರಪ್ಪ, ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಭಕ್ತಿಗೀತೆಗಳನ್ನು ಹಾಡಿ, ಮೌನಾಚರಣೆ ಮಾಡಿ ಶ್ರೀಗಳಿಗೆ ನಮನ ಸಲ್ಲಿಸಲಾಯಿತು. ವಿಶ್ವೇಶ ತೀರ್ಥ ಶ್ರೀಗಳು ಶ್ರೀಂಗಂಧ ಸಂಸ್ಥೆಯ ಗೌರವಾಧ್ಯಕ್ಷರು ಸಹ ಆಗಿದ್ದರು.