ರಾಮ, ಏಸು, ಅಲ್ಲಾ ಹೆಸರಲ್ಲಿ ರಾವಣ ರಾಜ್ಯ ನಿರ್ಮಾಣ: ಪ್ರಸನ್ನ ಹೆಗ್ಗೋಡು ಬೇಸರ - ಪ್ರಸನ್ನ ಹೆಗ್ಗೋಡು
ಬೆಂಗಳೂರು: ದೇಶ ಸ್ವಾತಂತ್ರ್ಯ ಪಡೆದ ಮೇಲೆ ಸುಖಗಳು, ಪ್ರಗತಿಗಳು ಹೆಚ್ಚಾಗಿವೆ ಬಿಟ್ಟರೆ, ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ, ಸ್ವರಾಜ್ಯ ಖಂಡಿತ ದಕ್ಕಿಲ್ಲ ಎಂದು ರಂಗಕರ್ಮಿ ಹಾಗೂ ಗಾಂಧಿ ಸಿದ್ಧಾಂತದಲ್ಲಿ ಬದುಕುತ್ತಿರುವ ಪ್ರಸನ್ನ ಹೆಗ್ಗೋಡು ಅವರು ಈಟಿವಿ ಭಾರತ್ ಗೆ ತಿಳಿಸಿದ್ದಾರೆ. ರಾಮ, ಏಸು, ಅಲ್ಲಾ ಹೆಸರಲ್ಲಿ ವಿಶ್ವದಾದ್ಯಂತ ರಾವಣ ರಾಜ್ಯ ನಿರ್ಮಾಣವಾಗುತ್ತಿದೆ.ಅಲ್ಲದೆ ಖಾದಿಗೆ ಉತ್ತೇಜನ ಸಿಗುವ ಬಗ್ಗೆ ಸರ್ಕಾರಗಳಿಂದ ಏನನ್ನೂ ನಿರೀಕ್ಷಿಸುವುದಿಲ್ಲ.ಈ ಸರ್ಕಾರ ವಿದೇಶಿ ಸರ್ಕಾರ ಎನ್ನುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.