ಕರ್ನಾಟಕ

karnataka

ಹೋರಾಟ ಮಾಡುತ್ತಿರುವ ರೈತರನ್ನು ಅವಮಾನಿಸಲಾಗುತ್ತಿದೆ: ರಮಾನಾಥ ರೈ

By

Published : Feb 5, 2021, 3:06 PM IST

ಮಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಮಾವೋವಾದಿ, ಉಗ್ರವಾದಿ, ಖಲಿಸ್ತಾನಿ ಎಂದು ಅವಮಾನಿಸಲಾಗುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಟಿಕಾಯತ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದಾಗ ಅದನ್ನು ಕಾಂಗ್ರೆಸ್ ಹತ್ತಿಕ್ಕಲಿಲ್ಲ. ಪ್ರತಿಭಟನೆ ರೈತರ ಹಕ್ಕಾಗಿದ್ದು ಬಿಜೆಪಿ ಪ್ರಜಾಪ್ರಭುತ್ವ ವಿರೋಧಿಯಾಗಿ ವರ್ತಿಸುತ್ತಿದೆ ಎಂದರು.

ABOUT THE AUTHOR

...view details