ಕರ್ನಾಟಕ

karnataka

ಆಹಾರ ಅರಸಿ ತೋಟಕ್ಕೆ ಬಂದ ದೈತ್ಯ ಹೆಬ್ಬಾವು ರಕ್ಷಣೆ: ವಿಡಿಯೋ ನೋಡಿ

By

Published : Jul 15, 2021, 8:49 PM IST

ಶಿವಮೊಗ್ಗ ನಗರ ಸೇರಿದಂತೆ ಸುತ್ತಮುತ್ತಲಿನ ಬಹುತೇಕ ಗ್ರಾಮಗಳು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ವನ್ಯಜೀವಿಗಳು ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಶಿವಮೊಗ್ಗದ ಹರಕರೆ ಕೂಡ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಹತ್ತಿರವಾಗಿದ್ದು, ಹಾವುಗಳು ಹೆಚ್ಚಾಗಿ ಕಂಡುಬರುತ್ತಿವೆ. ಈ ಹಿಂದೆ ಕೂಡ ಹರಕೆರೆಯ ಸೂರ್ಯನಾರಾಯಣ್ ಅವರ ತೋಟದಲ್ಲಿ ಹಾವುಗಳು ಗೋಚರಿಸಿದ್ದವು. ಇಂದು ಕೂಡ ಅವರ ತೋಟದಲ್ಲಿ ಕೆಲಸಗಾರರು ಕಳೆ ತೆಗೆಯುವ ಸಂದರ್ಭದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ತಕ್ಷಣ ಉರಗ ತಜ್ಞ ಕಿರಣ್ ಸ್ಥಳಕ್ಕೆ ಆಗಮಿಸಿ, ಹಾವನ್ನು ಸುರಕ್ಷಿತವಾಗಿ ಹಿಡಿದು ಅಭಯಾರಣ್ಯಕ್ಕೆ ಬಿಟ್ಟುಬಂದಿದ್ದಾರೆ.

ABOUT THE AUTHOR

...view details