ಕೊಪ್ಪಳ ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಫುಟ್ಪಾತ್ ತೆರವು - ಫುಟ್ಪಾತ್ ತೆರವು ಕಾರ್ಯಾಚರಣೆ
ಕೊಪ್ಪಳ ನಗರಸಭೆ ನಗರದಲ್ಲಿ ಫುಟ್ಪಾತ್ ತೆರವು ಕಾರ್ಯಾಚರಣೆ ನಡೆಸಿತು. ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಫುಟ್ಪಾತ್ ನಲ್ಲಿದ್ದ ಎಗ್ರೈಸ್ ಅಂಗಡಿಗಳು, ಹೂವಿನ ಅಂಗಡಿಗಳು ಸೇರಿದಂತೆ ಗೂಡಂಗಡಿಗಳನ್ನು ತೆರವುಗೊಳಿಸಲಾಯ್ತು. ಪದೇ ಪದೆ ಹೇಳಿದರೂ ಮತ್ತೆ ಮತ್ತೆ ಗೂಡಂಗಡಿಗಳನ್ನು ಫುಟ್ಪಾತ್ ಮೇಲೆ ತಂದಿಡುತ್ತಿದ್ದೀರಿ. ಇದೇ ರೀತಿ ಮುಂದುವರಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧಿಕಾರಿಗಳು ಎಚ್ಚರಿಸಿದರು.