ಕರ್ನಾಟಕ

karnataka

By

Published : Apr 24, 2020, 4:35 PM IST

ETV Bharat / videos

ಅಪ್ಪನ ಹಾಡು ಹಾಡಿದ ಅಪ್ಪು: ವರನಟನಿಗೆ ಯುವರತ್ನನ ಗಿಪ್ಟ್- ವಿಡಿಯೋ​​

ಕನ್ನಡ ಚಿತ್ರರಂಗದ ಆರಾಧ್ಯ ಧೈವ ವರನಟ ಡಾ. ರಾಜ್​ಕುಮಾರ್​ ಅವರ 92ನೇ ವರ್ಷದ ಹುಟ್ಟು ಹಬ್ಬವನ್ನು ಕನ್ನಡಿಗರು ಹಬ್ಬದ ರೀತಿಯಲ್ಲಿ ಆಚರಿಸುತ್ತಾ ಬಂದಿದ್ರು. ಆದ್ರೆ ಈ ಬಾರಿ ಕೊರೊನಾ ಮಹಾಮಾರಿಯಿಂದಾಗಿ ಅದೆಲ್ಲ ನಿಂತು ಹೋಗಿದೆ. ಸದ್ಯ ಅಣ್ಣಾವ್ರ ಮುದ್ದಿನ ಕಂದ ಪುನೀತ್​ ರಾಜ್​ ಕುಮಾರ ಕೊಂಚ ವಿಭಿನ್ನವಾಗಿ ತಂದೆ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಗಡ್ಡ ಬಿಟ್ಟು ಹೊಸ ಅವತಾರದಲ್ಲಿ ಅಪ್ಪನ ಸ್ಮರಣೆ ಮಾಡಿರುವ ಯುವರತ್ನ, ರಾಜ್​ ನಟನೆಯ ಕ್ರಾಂತಿ ವೀರ ಚಿತ್ರದ ಯಾರು ಏನು ಮಾಡುವರು ಮತ್ತು ರಾಜ ನನ್ನ ರಾಜ ಚಿತ್ರದ ನಿನದೇ ನೆನಪು ಹಾಡನ್ನ ಹಾಡಿ ತಂದೆಯನ್ನ ಸ್ಮರಿಸಿದ್ದಾರೆ. ಚರಣ್​ ರಾಜ್​ ಸಂಗೀತ ನೀಡಿದ್ದು, ರಾಧಾಕೃಷ್ಣ ರೆಡ್ಡಿ ಹಾಡಿಗೆ ಡೈರೆಕ್ಷನ್ ಮಾಡಿದ್ದಾರೆ.

ABOUT THE AUTHOR

...view details