ಕಾರಾಗೃಹ ಸಿಬ್ಬಂದಿಗೆ ಸೀಟ್ ಬೆಲ್ಟ್ ಹಾಕುವಂತೆ ತಾಕೀತು ಮಾಡಿದ ಪಿಎಸ್ಐ
ರಸ್ತೆ ನಿಯಮಗಳ ಪಾಲನೆ ಮತ್ತು ದಂಡ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯ ಪೊಲೀಸ್ ಇಲಾಖೆ ಮುಂದಾಗಿದೆ. ಜಿಲ್ಲೆಯ ಸಂಚಾರಿ ಠಾಣೆಯ ಪಿಎಸ್ಐ ಪಲ್ಲವಿ ಕೈಯಲ್ಲಿ ಕರಪತ್ರ ಹಿಡಿದು ದ್ವಿಚಕ್ರ ವಾಹನ ಸವಾರರಿಗೆ ರಸ್ತೆ ಜಾಗೃತಿ ಮೂಡಿಸಿದರು. ಇದೇ ಸಂದರ್ಭದಲ್ಲಿ ಕಾರಾಗೃಹ ಸಿಬ್ಬಂದಿ ರಸ್ತೆ ನಿಯಮ ಪಾಲಿಸದೇ ಸಂಚರಿಸುವುದನ್ನ ಕಂಡು ವಾಹನ ತಡೆದಿದ್ದು, ಸೀಟ್ ಬೆಲ್ಟ್ ಹಾಕಿಕೊಂಡು ವಾಹನ ಚಲಾಯಿಸುವಂತೆ ತಾಕೀತು ಮಾಡಿದ್ದಾರೆ.