ಶಿವಮೊಗ್ಗದಲ್ಲಿ ಇನ್ನೂ ಪ್ರತಿಷ್ಠಾಪನೆಯಾಗದ ಬಸವಣ್ಣ ಪುತ್ಥಳಿ... ಪಾಲಿಕೆ ಸದಸ್ಯರಿಂದ ಪ್ರತಿಭಟನೆ
ಅನಿವಾಸಿ ಭಾರತೀಯ ಡಾ. ನೀರಜ್ ಪಾಟೀಲ್, ಲಂಡನ್ನ ಥೇಮ್ಸ್ ನದಿ ದಂಡೆ ಮೇಲೆ ಪ್ರತಿಷ್ಠಾಪಿಸಿದ ಬಸವೇಶ್ವರ ಪುತ್ಥಳಿ ಮಾದರಿಯಲ್ಲಿ ಶಿವಮೊಗ್ಗ ನಗರದಲ್ಲೂ ಕಂಚಿನ ಬಸವೇಶ್ವರ ಪುತ್ಥಳಿಯನ್ನು ನಿರ್ಮಾಣ ಮಾಡಲು ಸುಮಾರು 30 ಲಕ್ಷ ರೂ. ಬೆಲೆ ಬಾಳುವ ಪುತ್ಥಳಿಯನ್ನು ಮಹಾನಗರ ಪಾಲಿಕೆಗೆ ಕೊಡುಗೆಯಾಗಿ ನೀಡಿದ್ದಾರೆ. ಆದರೆ ಒಂದೂವರೆ ವರ್ಷ ಕಳೆದರೂ ಬಸವೇಶ್ವರ ಪುತ್ಥಳಿಯನ್ನ ಪ್ರತಿಷ್ಠಾಪಿಸಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಮಹಾನಗರ ಪಾಲಿಕೆ ಎದುರು ಬಸವೇಶ್ವರ ವೇಷ ಧರಿಸಿ ಪ್ರತಿಭಟನೆ ನಡೆಸಲಾಯಿತು.