ಕರ್ನಾಟಕ

karnataka

By

Published : Dec 24, 2019, 3:31 PM IST

Updated : Dec 24, 2019, 4:11 PM IST

ETV Bharat / videos

ಬಳ್ಳಾರಿಯಲ್ಲಿ ವಿವಿಧ ಸಂಘಟನೆಗಳಿಂದ ಸಿಎಎ ಮತ್ತು ಎನ್ಆರ್​ಸಿ ವಿರುದ್ಧ ಪ್ರತಿಭಟನೆ

ಬಳ್ಳಾರಿ: ಜಿಲ್ಲೆಯ ಮೋತಿ ವೃತ್ತದಲ್ಲಿ ಇಂದು ಸಿಎಎ ಮತ್ತು ಎನ್ಆರ್​ಸಿ ವಿರುದ್ಧ ವಿವಿಧ ಸಂಘಟನೆಗಳಾದ ರೈತ ಸಂಘ, ಸಿಪಿಎಂ, ಸಿಪಿಐ ಮತ್ತು ಇನ್ನಿತರ ಎಡಪಕ್ಷಗಳು, ಕಾಂಗ್ರೆಸ್ ಪಕ್ಷದವರು ಸೇರಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಸಾವಿರಾರು ಮುಸ್ಲಿಂ ಸಮುದಾಯದ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ರೈತ ಮುಖಂಡರು, ಸಿಪಿಎಂ, ಸಿಪಿಐ ಪಕ್ಷಗಳ ಕಾರ್ಯಕರ್ತರು ಮತ್ತು ಜನರು ಸೇರಿ ಪ್ರತಿಭಟನೆ ನಡೆಸಲಾಯಿತು. ರಾಷ್ಟ್ರಗೀತೆಯನ್ನು ಹಾಡಿ ಜಾತ್ಯತೀತವಾಗಿ ಮನೋಭಾವನೆಯನ್ನು ಮೂಡಿಸಿದರು. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಸೂರ್ಯನಾರಾಯಣ ರೆಡ್ಡಿ, ಅನಿಲ್ ಹೆಚ್.ಲಾಡ್, ಅಲಂ ವೀರಭದ್ರಪ್, ಸಿಪಿಎಂ ಸತ್ಯಬಾಬು, ಟಿಜಿ.ವಿಠಲ್ ಇನ್ನಿತರು ಹಾಜರಿದ್ದರು.
Last Updated : Dec 24, 2019, 4:11 PM IST

For All Latest Updates

ABOUT THE AUTHOR

...view details