ಕರ್ನಾಟಕ

karnataka

ಯುವ ದಸರಾ ಸಂಭ್ರಮ: ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಭರದ ಸಿದ್ಧತೆ

By

Published : Sep 16, 2019, 8:19 PM IST

ಮೈಸೂರು ದಸರಾ ಉದ್ಘಾಟನೆಯ ಪ್ರಮುಖ ಆಕರ್ಷಣೆಯಾದ ಯುವ ದಸರಾ ಸಂಭ್ರಮ ಕಾರ್ಯಕ್ರಮ ನಾಳೆ ಉದ್ಘಾಟನೆಯಾಗಲಿದೆ. ಯುವ ಜನಾಂಗ ಸಾಂಸ್ಕೃತಿಕ ಸಿರಿ ಪಸರಿಸಲು ಕಾತರತೆಯಿಂದ ಕಾಯುತ್ತಿದ್ದಾರೆ. ಈ ಯುವ ಸಂಭ್ರಮವನ್ನು ಗೋಲ್ಡನ್ ಸ್ಟಾರ್ ಗಣೇಶ್ ಉದ್ಘಾಟಿಸಲಿದ್ದಾರೆ.‌ ನಾಳೆಯಿಂದ ಆರಂಭಗೊಳ್ಳುವ ಕಾರ್ಯಕ್ರಮ ಸೆ. 26ರಂದು ಮುಕ್ತಾಯವಾಗಲಿದೆ. 278 ಕಾಲೇಜುಗಳ ತಂಡಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಈಗಾಗಲೇ ಬಯಲು ರಂಗಮಂದಿರದಲ್ಲಿ ಭರದ ಸಿದ್ಧತೆ ಸಾಗಿದೆ.

ABOUT THE AUTHOR

...view details