ಮಂಡ್ಯದಲ್ಲಿ ಸರಳ ಕ್ರಿಸ್ಮಸ್ ಆಚರಣೆಗೆ ಸಕಲ ಸಿದ್ಧತೆ - ಕ್ರಿಸ್ಮಸ್ ಆಚರಣೆಗೆ ಸಕಲ ಸಿದ್ಧತೆ
ಮಂಡ್ಯ: ಪ್ರಸಿದ್ಧ ಸಂತ ಜೋಸೆಫರ ಚರ್ಚ್ನಲ್ಲಿ ಈ ಬಾರಿ ಸರಳ ಕ್ರಿಸ್ಮಸ್ ಆಚರಣೆಗೆ ಸಿದ್ಧತೆ ನಡೆದಿದೆ. ಕೋವಿಡ್ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಅದ್ದೂರಿ ಆಚರಣೆಗೆ ಕಡಿವಾಣ ಹಾಕಲಾಗಿದೆ. ಈ ಬಾರಿಯ ಕ್ರಿಸ್ಮಸ್ ಕೇವಲ ಪ್ರಾರ್ಥನೆಗಷ್ಟೇ ಸೀಮಿತವಾಗಿದೆ. ಹಬ್ಬದ ದಿನದಂದು ನಡೆಯುವ ಬಲಿ ಪೂಜೆಯಲ್ಲಿಯೂ ಕೂಡಾ ಸೀಮಿತ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸದಿರಲು ನಿರ್ಧರಿಸಲಾಗಿದೆ.