ಕರ್ನಾಟಕ

karnataka

ETV Bharat / videos

ಕುಷ್ಟಗಿಯಲ್ಲಿ ಅಕಾಲಿಕ ತುಂತುರು ಮಳೆ: ಇಕ್ಕಟ್ಟಿಗೆ ಸಿಲುಕಿದ ಜನತೆ.. - kushtagi rain news

By

Published : Jan 6, 2021, 2:23 PM IST

ಕುಷ್ಟಗಿ (ಕೊಪ್ಪಳ): ಬೆಳಗಿನ ಜಾವದಿಂದ ಕುಷ್ಟಗಿ ತಾಲೂಕಿನಲ್ಲಿ ಅಕಾಲಿಕವಾಗಿ ತುಂತುರು ಮಳೆ ಬೀಳುತ್ತಿದ್ದು. ಜನ ಸಾಮಾನ್ಯರನ್ನು ಅನೀರಿಕ್ಷಿತ ಇಕ್ಕಟ್ಟಿಗೆ ಸಿಲುಕಿಸಿತು. ಅನಿವಾರ್ಯ ಪರಿಸ್ಥಿತಿಯಲ್ಲಿ ಕೊಡೆ ಹಿಡಿದು ಜನ ಸಂಚರಿಸುತ್ತಿರುವ ದೃಶ್ಯ ಕಂಡು ಬಂತು. ಇನ್ನು ಈ ವಾತಾವರಣ ಹಿಂಗಾರು ಹಂಗಾಮಿನ ಬೆಳೆಗೆ ಪ್ರತಿಕೂಲವಾಗಿದ್ದು ರೈತ ಸಮುದಾಯದಿಂದ ಆತಂಕ ವ್ಯಕ್ತವಾಗಿದೆ. ಬಿಳಿಜೋಳ ತೆನೆಯೊಡೆದ ಸಂದರ್ಭದಲ್ಲಿ ಮಳೆಯಾಗಿರುವುದರಿಂದ ಸುಂಕ ತೊಳೆದು ಹೋದರೆ ಕಾಳು ಕಟ್ಟುವ ಪ್ರಮಾಣ ಕಡಿಮೆಯಾಗಲಿದ್ದು, ಮೋಡಕವಿದ ವಾತಾವರಣದಿಂದ ಕಡಲೆಗೆ ಕಾಯಿ ಕೊರಕ ಕೀಟ ಬಾಧೆಯ ಆತಂಕ ವ್ಯಕ್ತವಾಗಿದೆ.

ABOUT THE AUTHOR

...view details