ಸೋಲಾರ್ ಬೇಲಿ ಮುರಿಯೋದು ಗಜರಾಜನಿಗೆ ಈಝಿ... ಕಾಮಗಾರಿಲ್ಲಿ ನಡೆದಿದ್ಯಾ ದಗಲ್ಬಾಜಿ?
ಕೊಡಗಿನಲ್ಲಿ ಕಾಡಾನೆ ಮತ್ತು ಮಾನವನ ನಡುವಿನ ಸಂಘರ್ಷ ಸರ್ವೇಸಾಮಾನ್ಯ ಎಂಬಂತಾಗಿದೆ. ಪ್ರತಿದಿನ ಒಂದಲ್ಲ ಒಂದು ಭಾಗದಲ್ಲಿ ಜಮೀನಿಗೆ ದಾಳಿ ಮಾಡಿ ಬೆಳೆ ಹಾನಿಗೊಳಿಸಿ ರೈತರಿಗೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗೆ ತಲೆನೋವು ತಂದಿದ್ದ ಗಜಪಡೆಗೆ ಕಡಿವಾಣ ಹಾಕಲು ಮತ್ತು ಅವುಗಳು ಕಾಡಿನಿಂದ ಹೊರಬರದಂತೆ ಸೋಲಾರ್ ಬೇಲಿಗಳನ್ನು ಅಳವಡಿಸಲಾಗಿದೆ. ಆದರೆ, ಅಳವಡಿಸಿರುವ ಬೇಲಿ ಇದೀಗ ಶಕ್ತಿಯಿಲ್ಲದೆ ಜೀವ ಕಳೆದುಕೊಂಡಿದೆ. ಆದ್ದರಿಂದ ಸಲೀಸಾಗಿ ಸೋಲಾರ್ ಬೇಲಿ ಮೂಲಕವೇ ನಾಡಿಗೆ ಪ್ರವೇಶಿಸಿ ಜನರಲ್ಲಿ ಆತಂಕ ಹುಟ್ಟಿಸುತ್ತಿವೆ. ಈ ಬಗ್ಗೆ ಜನ ಹೇಳುತ್ತಿರುವುದೇನು?