ಕರ್ನಾಟಕ

karnataka

ETV Bharat / videos

ನೀನು ಯಾವನೇ ಇರು ಕಾಲಾಗ ಹಾಕಿ ತುಳಿತೀನಿ...! ರೈತನ ಮೇಲೆ ಪೊಲೀಸಪ್ಪನ ದರ್ಪ ಆರೋಪ

By

Published : Sep 14, 2020, 2:00 PM IST

ಕಲಬುರಗಿಯಲ್ಲಿ ರೈತನ ಮೇಲೆ ಪಾಟ್ರೋಲಿಂಗ್ ಪೊಲೀಸ್ ಕಾನ್ಸ್​ಟೇಬಲ್​ ಓರ್ವ ದರ್ಪ ತೋರಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಜೇವರ್ಗಿ ತಾಲೂಕಿನ ಅವರಾದ ಗ್ರಾಮದ ಬಳಿ ನಡೆದಿದೆ ಎನ್ನಲಾದ ಪೊಲೀಸಪ್ಪನ ದರ್ಪದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರೈತ ಅಶೋಕ ಗುತ್ತೇದಾರ ಎಂಬುವರ ಮೇಲೆ ಜೇವರ್ಗಿ ಪೊಲೀಸ್ ಠಾಣೆಯ ಕಾನ್ಸಟೇಬಲ್ ತಾರಾಸಿಂಗ್ ನಾಯಕ್ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗ್ತಿದೆ. ಅವರಾದ ಕ್ರಾಸ್ ಬಳಿ ಪಾಟ್ರೋಲಿಂಗ್ ಕರ್ತವ್ಯದಲ್ಲಿದ್ದ ಪೊಲೀಸರು ಮತ್ತು ಲಾರಿ ಚಾಲಕರ ನಡುವೆ ಯಾವುದೋ ವಿಷಯಕ್ಕೆ ವಾಗ್ವಾದ ನಡೆದಿದೆ ಎನ್ನಲಾಗ್ತಿದೆ. ಇದೇ ವೇಳೆ ಹೊಲಕ್ಕೆ ಹೋಗುತ್ತಿದ್ದ ರೈತ ಅಶೋಕ್ ಗುತ್ತೇದಾರ ಇದನ್ನು ನೋಡಿಕೊಂಡು ನಿಂತಿದ್ದಾನೆ. ಇದರಿಂದ ಕೋಪಗೊಂಡ ಕಾನ್ಸಟೇಬಲ್ ತಾರಾಸಿಂಗ್, ಅಶೋಕ್ ಗುತ್ತೇದಾರ ಮೇಲೆ ರೇಗಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ABOUT THE AUTHOR

...view details