ಶ್ರೀಶೈಲದಿಂದ ನಗರಕ್ಕೆ ಮರಳಿದ ಯಾತ್ರಿಕರ ಪರದಾಟ - ವಾಹನವಿಲ್ಲದೆ ಯಾತ್ರಿಕರ ಪರದಾಟ
ಶ್ರೀಶೈಲ ಯಾತ್ರೆಯಿಂದ ಜಿಲ್ಲೆಗೆ ಮರಳಿದ 20ಕ್ಕೂ ಹೆಚ್ಚು ಯಾತ್ರಿಕರು ತಮ್ಮೂರುಗಳಿಗೆ ತೆರಳಲು ಪರದಾಡುವಂತಾಗಿದೆ. ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದಲ್ಲಿ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಾಗಿ 15 ದಿನಗಳ ಹಿಂದೆ ಜಿಲ್ಲೆಯಿಂದ ಪಾದಯಾತ್ರೆ ಮೂಲಕ ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ತೆರಳಿದ್ದ ಯಾತ್ರಿಕರಿಗೆ ದಿಕ್ಕುತೋಚದಂತಾಗಿದೆ.