ಕರಾವಳಿ ಕಂಬಳಕ್ಕೆ ಮತ್ತೆ ಬೀಳುತ್ತಾ ಬ್ರೇಕ್ ? - Supreme court to stop Kambala in karavali
ಕರಾವಳಿ ಕಂಬಳಕ್ಕೆ ಮತ್ತೆ ಬ್ರೇಕ್ ಬೀಳುವ ಅಪಾಯ ಕಂಡು ಬರುತ್ತಿದೆ. ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟ ನಂತರ ಕಳೆದ ವರ್ಷ ಕಂಬಳ ಜಾತ್ರೆ ಸುಸೂತ್ರವಾಗಿ ನಡೆದಿತ್ತು. ಆದರೆ ಅಂದು ಕಂಬಳದಲ್ಲಿ ನಡೆದ ಲೋಪದೋಷಗಳನ್ನೇ ಮುಂದಿಟ್ಟುಕೊಂಡು ಮತ್ತೆ ಪೇಟಾ (ಪೀಪಲ್ ಫರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್), ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಹೀಗಾಗಿ ನವೆಂಬರ್ ಅಂತ್ಯದಲ್ಲಿ ಆರಂಭವಾಗಬೇಕಾದ ಕಂಬಳದ ಸೀಸನ್ಗೆ ಮತ್ತೊಮ್ಮೆ ಹಿನ್ನಡೆಯಾಗುವ ಅಪಾಯ ಎದುರಾಗಿದೆ. ಈ ಕುರಿತು ಒಂದು ವರದಿ..