ಪೇಜಾವರ ಶ್ರೀಗಳ ಸಾವನ್ನು ಸಂಭ್ರಮಿಸುವ ಕಿಡಿಗೇಡಿಗಳಿಗೆ ಶಿಕ್ಷೆಯಾಗಬೇಕು: ಶ್ರೀಗಳ ಭಕ್ತ - Sri Pejavara shri Mutt
ಪೇಜಾವರ ಶ್ರೀಗಳು ಹಿಂದೂ ಧರ್ಮದ ಏಳಿಗೆಗಾಗಿ ಶ್ರಮಿಸಿದವರು. ಆದರೆ, ಎಂದೂ ಕೂಡ ಅವರು ಅನ್ಯಧರ್ಮೀಯರಿಗೆ ಭೇದ ಭಾವ ಮಾಡಿಲ್ಲ. ಅಂತವರ ವಿರುದ್ಧ ಕೆಲ ಕಿಡಿಗೇಡಿಗಳು ಅವಹೇಳನಕಾರಿ ಮಾತುಗಳನ್ನಾಡುತ್ತಿದ್ದಾರೆ. ಸಾವು ಯಾರದ್ದೇ ಆದರು ಅದನ್ನು ಸಂಭ್ರಮಿಸುವುದು ಮನುಷ್ಯತ್ವ ಅಲ್ಲ. ಅದರಲ್ಲೂ ಎಲ್ಲರ ಒಳಿತಿಗಾಗಿ ಶ್ರಮಿಸಿದವರ ವಿಚಾರದಲ್ಲಿ ಹೀಗೆ ನಡೆದುಕೊಳ್ಳುವವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಈ ವಿಚಾರವಾಗಿ ಈಗಾಗಲೇ ದೂರು ಕೂಡ ದಾಖಲಿಸಾಗಿದೆ ಎಂದು ಬ್ರಾಹ್ಮಣ ಸಂಘದ ರಾಮದಾಸ ಅಭಿಪ್ರಾಯಪಟ್ಟರು.