ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಶಿವಮೊಗ್ಗದ ಜನರ ಮನವಿಯೇನು? - Shivamogga district news
ಮುಂಬೈನಲ್ಲಿ ಲಾಕ್ ಆದ ಶಿವಮೊಗ್ಗ ಜಿಲ್ಲೆಯ ಜನ ವಿಡಿಯೋ ಮಾಡಿ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದಾರೆ. ಲಾಕ್ಡೌನ್ ಹೇರಿಕೆ ಬಳಿಕ ಕೆಲಸಗಳಿಗೆ ತೆರಳಿದ ಅನೇಕರು ತಮ್ಮೂರುಗಳಿಗೆ ಬರಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಂತೆ ಜಿಲ್ಲೆಯ 70ಕ್ಕೂ ಹೆಚ್ಚು ಜನ ಮುಂಬೈನ ಕಲ್ವಾದಲ್ಲಿ ಸಿಲುಕಿಕೊಂಡಿದ್ದು ನಮ್ಮನ್ನ ನಮ್ಮೂರಿಗೆ ಕರೆಸಿಕೊಳ್ಳಿ ಎಂದು ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.