6 ವರ್ಷದಿಂದ ಸ್ವಚ್ಛತೆಗಾಗಿ 'ಪಹರೆ': ಸ್ವಚ್ಛ ಭಾರತದ ಕನಸು ನನಸಾಗಿಸುತ್ತಿರುವ ಸಮಾನ ಮನಸ್ಕರು! - ಸ್ವಚ್ಛತೆ ಕಾರ್ಯದಲ್ಲಿ ತೋಡಗಿರುವ ಪಹರೆ ಸಂಘಟನೆ
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ಪಹರೆ ಹೆಸರಿನ ಸಂಘಟನೆ ಕಳೆದ 6 ವರ್ಷಗಳಿಂದ ಸ್ವಚ್ಛತೆ ಮಂತ್ರ ಜಪಿಸುತ್ತಿದೆ. ಪ್ರಧಾನಿ ಮೋದಿಯವರ ಸ್ವಚ್ಛತಾ ಆಂದೋಲನ ಕರೆಯಿಂದ ಪ್ರೇರಣೆಗೊಂಡ ನಗರದ ಯುವಪಡೆ ಪಹರೆ ಸಂಘಟನೆಯನ್ನ ಕಟ್ಟಿಕೊಂಡು ಸ್ವಚ್ಛತಾ ಕಾರ್ಯ ಮಾಡುತ್ತಿದೆ. ಪ್ರತಿ ಶನಿವಾರ ನಗರದ ಬಸ್ ನಿಲ್ದಾಣ, ಸರ್ಕಾರಿ ಕಚೇರಿ, ಕಡಲ ತೀರ, ಪಾರ್ಕ್ ಸೇರಿದಂತೆ ಹಲವೆಡೆ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಗಮನ ಸೆಳೆದ ಪಹರೆ ವೇದಿಕೆ ಇಂದಿಗೆ 317ನೇ ವಾರ ಪೂರೈಸಿದೆ.
Last Updated : Jan 24, 2021, 10:50 PM IST