ಕರ್ನಾಟಕ

karnataka

ಜೋರು ಮಳೆ,ಸಿಡಿಲು ಬಡಿದು ಎತ್ತು ಸಾವು

By

Published : May 10, 2020, 7:17 PM IST

Published : May 10, 2020, 7:17 PM IST

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ಮುದಗಲ್ಲ ಹೋಬಳಿ ಕೆ. ಮರಿಯಮ್ಮನಹಳ್ಳಿಯಲ್ಲಿ ಇಂದು ಸಂಜೆ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ. ಮೃತಪಟ್ಟಿರುವ ಎತ್ತು ಬಾಲಸ್ವಾಮಿ ಪ್ರಕಾಶಪ್ಪ ಎಂಬ ರೈತನಿಗೆ ಸೇರಿದ್ದಾಗಿದೆ. ಕೃಷಿ ಚಟುವಟಿಕೆ ಮುಗಿಸಿ ಜಮೀನಿನಲ್ಲಿ ಕಟ್ಟಿ ಹಾಕಿದ್ದ ಸಮಯದಲ್ಲಿ ಈ ಘಟನೆ ಜರುಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತಾಲೂಕಿನ ಸರ್ಜಾಪುರ, ಹೆಸರೂರ, ಅಮರಾವತಿ, ಕುಪ್ಪಿಗುಡ್ಡ ಸೇರುದಂತೆ ಇತರೆಡೆಗಳಲ್ಲಿ ಆಲಿಕಲ್ಲು ಸಮೇತ ಧಾರಾಕಾರ ಮಳೆ ಆಗಿದೆ.

ABOUT THE AUTHOR

...view details