ಕೊರೊನಾ ಕರ್ಮ....500 ರೂ. ನೋಟು ಕಂಡು ಭಯಭೀತರಾದ ಮಂಡ್ಯ ಜನತೆ - 500 rs note on road
ಐದು ರೂಪಾಯಿ ನಾಣ್ಯ ರಸ್ತೆಯಲ್ಲಿ ಬಿದ್ದಿದ್ದರೆ ಬಿಡದ ಜನರೀಗ ಐದುನೂರು ರೂಪಾಯಿ ಕಂಡು ಹೆದರುವ ಕಾಲ ಬಂದಿದೆ. ಹೌದು, ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಗಾಣಿಗರ ರಸ್ತೆಯಲ್ಲಿ 500 ರೂಪಾಯಿ ಮುಖಬೆಲೆಯ 6 ನೋಟುಗಳು ಬಿದ್ದಿದ್ದರೂ ಕೂಡಾ ಜನರು ಅದನ್ನು ತಗೆದುಕೊಳ್ಳದೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ ಘಟನೆ ನಡೆದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ನೋಟಿನ ಮೇಲೆ ಸ್ಯಾನಿಟೈಜರ್ ಸಿಂಪಡಿಸಿ, ಗ್ಲೌಸ್ ಧರಿಸಿ ನೋಟು ಎತ್ತಿಕೊಂಡರು. ಹಣ ಕಳೆದುಕೊಂಡವರು ಯಾರಾದರೂ ಇದ್ದರೆ ಠಾಣೆಗೆ ಬಂದು ಪಡೆಯಲು ಸೂಚನೆ ನೀಡಲಾಗಿದೆ.