ಉತ್ತರ ಕನ್ನಡದಲ್ಲಿ ನೂತನ ಮರಳು ನೀತಿ ಜಾರಿ: ತಪ್ಪಲಿದೆಯೇ ಮರಳು ದಂಧೆಕೋರರ ಹಾವಳಿ! - New sand policy implemented in Karawara
ಕರಾವಳಿಯಲ್ಲಿ ಮರಳು ಖರೀದಿ ಮಾಡೋದಕ್ಕೆ ಎದುರಿಸಬೇಕಾದ ಸಮಸ್ಯೆ ಒಂದೆರಡಲ್ಲ. ಒಂದೆಡೆ ನಿಯಮಿತ ಪರವಾನಗಿಯಿಂದಾಗಿ ಮರಳು ಸಿಗುವುದೇ ಕಷ್ಟಕರವಾಗಿದ್ದು, ಇನ್ನೊಂದೆಡೆ ದುಬಾರಿ ದರ ನೀಡಿ ಮರಳು ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಮರಳು ದಂಧೆಕೋರರ ಮೇಲೆ ನಿಯಂತ್ರಣ ಹೇರುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾಡಳಿತ ನೂತನ ಮರಳು ನೀತಿ ಜಾರಿಗೆ ತಂದಿದೆ.