ಕರ್ನಾಟಕ

karnataka

ETV Bharat / videos

ನೆರೆಯಿಂದ ರಾತ್ರಿಪೂರ್ತಿ ಪಂಪ್​ಹೌಸ್​ನಲ್ಲಿ ಕಾಲ ಕಳೆದ ಇಬ್ಬರನ್ನ ರಕ್ಷಿಸಿದ ಎನ್​ಡಿಆರ್​ಎಫ್​ - ಸ್ವರ್ಣ ನದಿಯ ಜಲವಿದ್ಯುತ್ ಘಟಕ

By

Published : Sep 20, 2020, 6:54 PM IST

ಉಡುಪಿ : ಎನ್​ಡಿಆರ್​ಎಫ್ ತಂಡದಿಂದ ಸ್ವರ್ಣನದಿಯ ಜಲವಿದ್ಯುತ್ ಘಟಕದಲ್ಲಿ ಸಿಲುಕಿದವರ ರಕ್ಷಣೆ ಮಾಡಲಾಗಿದೆ. ಮಂಜು ಮತ್ತು ಗೋವಿಂದಾ ಎಂಬ ಇಬ್ಬರ ರಕ್ಷಿಸಲಾಗಿದೆ. ಎರಡು ದಿನಗಳ ನಿರಂತರ ಮಳೆಯಿಂದ ಉಕ್ಕಿ ಹರಿದ ಸುವರ್ಣಾ ನದಿಯ ಆರ್ಭಟದಿಂದ ಹಿರಿಯಡ್ಕದ ಬಜೆ ಸಮೀಪ ಅಣೆಕಟ್ಟಿನ ಪಕ್ಕದಲ್ಲಿರುವ ಜಲ ವಿದ್ಯುತ್ ಯೋಜನೆ ಘಟಕದಲ್ಲಿ ಸಿಕ್ಕಿ ಹಾಕಿಕೊಂಡ ಇಬ್ಬರು ಸಿಬ್ಬಂದಿ ರಕ್ಷಿಸಲಾಗಿದೆ. ಪಂಪ್​ಹೌಸ್​ನಲ್ಲಿ ರಾತ್ರಿ ಹೊತ್ತು ಮಲಗಿದ್ದ ಇಬ್ಬರು ಸಿಬ್ಬಂದಿ, ರಾತ್ರಿ ಏಕಾಏಕಿ ಉಕ್ಕೇರಿದ ನದಿಯಿಂದ ಆತಂಕಗೊಂಡಿದ್ದರು. ಪಂಪ್​ಹೌಸ್​ನ ನಾಲ್ಕು ಮೂಲೆಯಲ್ಲೂ ಆವರಿಸಿರುವ ನೀರಿನಿಂದ ಜನರೇಟರ್ ಮೇಲೆ ಕುಳಿತು ಜೀವ ಉಳಿಸಿಕೊಂಡಿದ್ದರು. ಇದೀಗ ಎನ್​ಡಿಆರ್​ಎಫ್ ತಂಡ ಇಬ್ಬರನ್ನು ರಕ್ಷಣೆ ಮಾಡಿದೆ.

ABOUT THE AUTHOR

...view details