ಮೋದಿ ಆಡಳಿತದಲ್ಲಿ ದೇಶ ಅಭಿವೃದ್ಧಿಯಾದಂತೆ, ಬಿಎಸ್ವೈ ಆಡಳಿತದಲ್ಲಿ ರಾಜ್ಯ ಮುನ್ನಡೆ: ತೇಜಸ್ವಿ ಸೂರ್ಯ
ಬೆಂಗಳೂರು : ಬಿಎಸ್ವೈ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ರಾಜಭವನದತ್ತ ಸಂಸದ ತೇಜಸ್ವಿ ಸೂರ್ಯ ಮತ್ತು ಬಿಜೆಪಿ ಉಸ್ತುವಾಗಿ ಮುರಳೀಧರ್ ರಾವ್ ತೆರಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಮೋದಿಯವರ ನೇತೃತ್ವದಲ್ಲಿ ದೇಶ ಯಾವ ರೀತಿ ಅಭಿವೃದ್ಧಿ ಪತದಲ್ಲಿ ಮುಂದುವರಿಯುತ್ತಿದೆಯೋ, ಅದೇ ರೀತಿ ರಾಜ್ಯವು ಯಡಿಯೂರಪ್ಪ ನೇತೃತ್ವದಲ್ಲಿ ಅಭಿವೃದ್ದಿ ಪಥದತ್ತ ಮುಂದುವರೆಯಲಿದೆ. ಎಲ್ಲಾ ಜನರು ಆಸೆ ಪಡುವಂತ ಆಡಳಿತವನ್ನು ಬಿಜೆಪಿ ನೀಡಲಿದೆ ಎಂದರು.