ಕರ್ನಾಟಕ

karnataka

ETV Bharat / videos

ವಿಷ ಉಣಿಸಿರುವ ಶಂಕೆ.. 15ಕ್ಕೂ ಹೆಚ್ಚು ಕುರಿಗಳು ಸಾವು - Kolar latest update news

By

Published : Dec 5, 2020, 12:56 PM IST

ಕೋಲಾರ : ದುಷ್ಕರ್ಮಿಗಳ ಕೃತ್ಯಕ್ಕೆ ಸುಮಾರು 15ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಪರಿಣಾಮ ಬಡ ರೈತ ಕಂಗಾಲಾಗಿದ್ದಾನೆ. ಕೋಲಾರ‌ ಜಿಲ್ಲೆ ಮುಳಬಾಗಿಲು ತಾಲೂಕಿನ ಬೈರಕೂರು ಗ್ರಾಮದಲ್ಲಿ ಈ ಘಟನೆ ಜರುಗಿದೆ. ಗ್ರಾಮದ ಕುಮಾರಪ್ಪ ಎಂಬುವರಿಗೆ ಸೇರಿದ ಸುಮಾರು 15ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಹಳೆ ದ್ವೇಷದ ಹಿನ್ನೆಲೆ ಕಿಡಿಗೇಡಿಗಳು‌ ಶೆಡ್​​ನಲ್ಲಿದ್ದ ಕುರಿಗಳಿಗೆ ವಿಷ ಉಣಿಸಿರುವ ಪರಿಣಾಮ ಕುರಿಗಳು ಸಾವನ್ನಪ್ಪಿವೆ ಎಂದು ರೈತ ಶಂಕೆ ವ್ಯಕ್ತಪಡಿಸಿದ್ದಾನೆ. ಅಲ್ಲದೆ ಪ್ರತಿ ಗಂಟೆಗೆ ಒಂದರಂತೆ ಕುರಿಗಳು ಸಾವನ್ನಪ್ಪುತ್ತಿದ್ದು, ಉಳಿದ ಕುರಿಗಳನ್ನ ಬದುಕಿಸಿಕೊಳ್ಳಲು ರೈತ ಪರದಾಡುವಂತಾಗಿದೆ. ಒಂದೇ ಬಾರಿ 15ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಹಿನ್ನೆಲೆ ಕಂಗಾಲಾದ ರೈತ ಕಣ್ಣೀರು ಹಾಕುತ್ತಿದ್ದಾನೆ. ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

...view details