ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆ... ಈಟಿವಿ ಭಾರತ್ಗೆ ವಿ.ಸೋಮಣ್ಣ ವಿಶೇಷ ಸಂದರ್ಶನ - undefined
ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಮಣಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದ್ರೆ ಪ್ರಧಾನಿ ಮೋದಿ ಅಲೆ ನಡುವೆ ಅದೆಲ್ಲವೂ ಗೌಣವಾಗಿವೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಈಟಿವಿ ಭಾರತ್ಗೆ ವಿಶೇಷ ಸಂದರ್ಶನ ನೀಡಿದ ಅವರು, ತುಮಕೂರು ಲೋಕಸಭೆ ಕ್ಷೇತ್ರ ಸೇರಿದಂತೆ ಎಲ್ಲೆಡೆ ಮೋದಿ ಅಲೆ ವ್ಯಾಪಿಸಿದೆ. ಮೋದಿ ಪ್ರಧಾನಿಯಾಗಬೇಕು ಎಂಬ ಸಂಕಲ್ಪ ಕ್ಷೇತ್ರದ ಮತದಾರದ್ದು. ಹೀಗಾಗಿ ದೇವೇಗೌಡರು ದೇವೇಗೌಡರಾಗಿಯೇ ಇರುತ್ತಾರೆ ಎಂದು ಒಗಟಾಗಿ ಹೇಳಿದರು.