ಕರ್ನಾಟಕ

karnataka

ETV Bharat / videos

ವಿಧಾನ ಪರಿಷತ್​ನಲ್ಲಿ ನಡಿದ ದುರ್ಘಟನೆ ಮರುಕಳಿಸಬಾರದು: ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ - ಮೈಸೂರು ಸುದ್ದಿ

By

Published : Jan 13, 2021, 8:59 AM IST

ಮೈಸೂರು:ವಿಧಾನ ಪರಿಷತ್ ನಲ್ಲಿ ನಡೆದ ಗಲಾಟೆ, ಅದೊಂದು ಘಟನೆಯಲ್ಲ ದುರ್ಘಟನೆ. ಎಂದೂ ಆ ದುರ್ಘಟನೆ ಮರುಕಳಿಸಬಾರದು. ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವಿಧಾನ ಪರಿಷತ್​ನ ಹಿರಿಯ ಸದಸ್ಯ ಅಲ್ಲಂ ವೀರಭದ್ರಪ್ಪ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಹಿರಿಯರ ಮನೆ ಎಂದು ಪ್ರಸಿದ್ಧವಾಗಿರುವ ಪರಿಷತ್ ಬೇಕು ಬೇಡಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ನಾನು ಏನನ್ನು ಹೇಳುವುದಿಲ್ಲ. ಬೇಕು ಅಥವಾ ಬೇಡ ಎಂಬುದನ್ನು ಸರ್ಕಾರ ನಿರ್ಧರಿಸುತ್ತದೆ. ಆದರೆ, ವಿಧಾನ ಪರಿಷತ್​ನಲ್ಲಿ ನಡೆಯುವ ಚರ್ಚೆ ತುಂಬ ಅರ್ಥಪೂರ್ಣವಾಗುತ್ತದೆ. ಸರ್ಕಾರಕ್ಕೆ ಮಾರ್ಗದರ್ಶನ ಮಾಡಲು, ಜನಪರ ಚರ್ಚೆ ಮಾಡಲು ಪರಿಷತ್ ಅವಶ್ಯಕ. ನಾವು ಇನ್ನು ಮುಂದೆ ಪರಿಷತ್ ಆರಂಭವಾದ ಮೇಲೆ ಪ್ರಾರಂಭದಲ್ಲಿ ಎಲ್ಲಾ ಸದಸ್ಯರು ಇನ್ನು ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಪ್ರಮಾಣ ಮಾಡಬೇಕು ಎಂದು ಹಿರಿಯ ಸದಸ್ಯ ಅಲ್ಲಂ ವೀರಭದ್ರಪ್ಪ ಸಲಹೆ ನೀಡಿದರು.

ABOUT THE AUTHOR

...view details