ಕರ್ನಾಟಕ

karnataka

By

Published : Sep 28, 2020, 9:23 AM IST

ETV Bharat / videos

ಕೆ.ಆರ್.ಮಾರುಕಟ್ಟೆಯಲ್ಲಿ ಬಂದ್​ಗೆ ಮಿಶ್ರ ಪ್ರತಿಕ್ರಿಯೆ: ಗ್ರಾಹಕರಿಲ್ಲದೆ ಮನೆ ಕಡೆ ಹೊರಟ ವ್ಯಾಪಾರಿಗಳು

ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್​ಗೆ ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನ ಸುತ್ತಮುತ್ತಲಿಂದ ವ್ಯಾಪಾರಿಗಳು ಬೆಳ್ಳಂಬೆಳಗ್ಗೆ ಬಂದು ಹೂವು, ತರಕಾರಿ ವ್ಯಾಪಾರ ಆರಂಭಿಸಿದ್ದರು. ಆದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಾರದ ಕಾರಣ ಫುಟ್​​ಪಾತ್ ವ್ಯಾಪಾರಿಗಳು ಮನೆ ಕಡೆ ಹೊರಟರು. ಮಳಿಗೆಗಳ ಕೆಲ ಅಂಗಡಿಗಳು ಮಾತ್ರ ತೆರೆದಿದ್ದು, ಕೆಲವು ಇನ್ನೂ ತೆರೆದಿಲ್ಲ. ಗ್ರಾಹಕರನ್ನು ನೋಡಿಕೊಂಡು ವ್ಯಾಪಾರ ಆರಂಭಿಸಲು ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ಕೆ.ಆರ್. ಮಾರುಕಟ್ಟೆ ಸಂಪೂರ್ಣ ಸ್ತಬ್ಧವಾಗಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್​ನೊಂದಿಗೆ ಬೆರಳೆಣಿಕೆಯಷ್ಟು ವ್ಯಾಪಾರ ವಹಿವಾಟು ಮುಂದುವರೆದಿದೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.

ABOUT THE AUTHOR

...view details