ಕರ್ನಾಟಕ

karnataka

By

Published : Mar 20, 2021, 3:15 PM IST

Updated : Mar 20, 2021, 4:01 PM IST

ETV Bharat / videos

ಚಕ್ಕಡಿ ಏರಿ ಗ್ರಾಮ ವಾಸ್ತವ್ಯಕ್ಕೆ ಬಂದ ಸಚಿವ ಆರ್.ಅಶೋಕ್​ಗೆ ಅದ್ಧೂರಿ ಸ್ವಾಗತ

ಹುಬ್ಬಳ್ಳಿ: ಇಂದು ಛಬ್ಬಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡಲಿರುವ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಗ್ರಾಮಸ್ಥರು ಭವ್ಯ ಸ್ವಾಗತ ಕೋರಿದ್ದಾರೆ. ಪೂರ್ಣ ಕುಂಭದೊಂದಿಗೆ ಗ್ರಾಮದ ಮಹಿಳೆಯರು ಸ್ವಾಗತಿಸಿದರು. ಜಗ್ಗಲಿಗೆ, ಕೋಲಾಟ, ನಾದಸ್ವರದ ಮೇಳದೊಂದಿಗೆ ಮೆರವಣಿಗೆ ಜರುಗಿದ್ದು, ಸಿಂಗಾರಗೊಂಡ ಎತ್ತಿನ ಚಕ್ಕಡಿ ಓಡಿಸಿಕೊಂಡು ಸಚಿವ ಆರ್‌.ಅಶೋಕ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಗ್ರಾಮವನ್ನು ಪ್ರವೇಶಿಸಿದರು.
Last Updated : Mar 20, 2021, 4:01 PM IST

ABOUT THE AUTHOR

...view details