ಯಾರೂ ಬ್ಲಾಕ್ಮೇಲ್ ಮಾಡಿಲ್ಲ, ಬ್ಲಾಕ್ಮೇಲ್ಗೆ ಮಂತ್ರಿಸ್ಥಾನ ಕೊಡಲ್ಲ: ಎಂಟಿಬಿ ನಾಗರಾಜ್ - MTB Nagaraj Statement
ಹಾವೇರಿ: ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ನೂತನ ಸಚಿವ ಎಂಟಿಬಿ ನಾಗರಾಜ್, ಯಾರು ಬ್ಲಾಕ್ಮೇಲ್ ಮಾಡಿಲ್ಲ, ಬ್ಲಾಕ್ಮೇಲ್ಗೆ ಮಂತ್ರಿಸ್ಥಾನ ಕೊಡಲ್ಲ. ವಿಶ್ವನಾಥ್ ಅವರಿಗೆ ಸಿಡಿ ವಿಚಾರ ಏನು ಗೊತ್ತಿದೆಯೋ ನನಗೆ ಗೊತ್ತಿಲ್ಲ. ಅವರನ್ನು ಸಚಿವರನ್ನಾಗಿ ಮಾಡಲು ಕಾನೂನಿನ ತೊಡಕುಗಳಿವೆ. ಮುಂದಿನ ದಿನಗಳಲ್ಲಿ ಅವರಿಗೂ ಸಿಗಬಹುದು. ಶಾಸಕ ಮುನಿರತ್ನರದ್ದು ಪ್ರಾಬ್ಲಮ್ ಇದೆ. ಮುಂದಿನ ದಿನಗಳಲ್ಲಿ ಅವರಿಗೂ ಮಂತ್ರಿ ಸ್ಥಾನ ಸಿಗುತ್ತೆ. ಸಿ.ಪಿ.ಯೋಗೇಶ್ವರ್ ಮೇಲಿನ ಕೇಸ್ಗಳು ಏನಿವೆ ಎಂಬುದನ್ನು ಅರೋಪ ಮಾಡಿದವರೇ ಪ್ರೂವ್ ಮಾಡಲಿ ಎಂದರು.