ಕರ್ನಾಟಕ

karnataka

ನೆಲ, ಜಲ, ಭಾಷೆ, ಗಡಿ ವಿಚಾರಕ್ಕೆ ಯಾರೇ ಅಡ್ಡ ಬಂದರೂ ಕನ್ನಡಿಗರು ಸಹಿಸುವುದಿಲ್ಲ: ಸಚಿವ ಈಶ್ವರಪ್ಪ

By

Published : Jan 24, 2021, 3:30 PM IST

ಶಿವಮೊಗ್ಗ: ನೆಲ, ಜಲ, ಭಾಷೆ, ಗಡಿ ವಿಚಾರಕ್ಕೆ ಯಾರೇ ಅಡ್ಡ ಬಂದರೂ ಕನ್ನಡಿಗರು ಸಹಿಸುವುದಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ನಗರದ ಸಾಹಿತ್ಯ ಪರಿಷತ್ತಿನಲ್ಲಿ ಶಿವಮೊಗ್ಗ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಡೆದ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ನಂತರ ಮಾತನಾಡಿದರು. ಕುವೆಂಪು ಅವರು ತಮ್ಮ ಸಾಹಿತ್ಯದ ಮೂಲಕ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ದೇಶದಲ್ಲಿರುವ ಪ್ರತಿ ರಾಜ್ಯದ ಜನರು ಅವರವರ ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು. ಕಲೆ, ಸಾಹಿತ್ಯ ಎಂದಿಗೂ ಜೀವಂತವಾಗಿರುವಂತಹದ್ದು ಎಂದು ತಿಳಿಸಿದರು.

ABOUT THE AUTHOR

...view details