ಹೈನುಗಾರಿಕೆಯಲ್ಲಿ ಯಶಸ್ಸು ಕಂಡ ಎಂಬಿಎ ಪದವೀಧರ! - undefined
ಕೊಪ್ಪಳ: ಎಸ್ಎಸ್ಎಲ್ಸಿ ಮುಗಿದು ಕಾಲೇಜು ಮೆಟ್ಟಿಲು ಹತ್ತಿದರೆ ಸಾಕು ಗ್ರಾಮೀಣ ಪ್ರದೇಶವನ್ನು ತೊರೆಯುವ ಜನರೇ ಹೆಚ್ಚು. ಆದರೆ ಇಲ್ಲೊಬ್ಬ ಯುವಕ ನಗರದ ಬ್ಯುಸಿ ಜೀವನದಿಂದ ಬೇಸರಗೊಂಡು ಹೈನುಗಾರಿಕೆಯಲ್ಲಿ ತೊಡಗಿಕೊಂಡು ಸಕ್ಸಸ್ ಆಗಿದ್ದಾರೆ. ವೀರಭದ್ರಗೌಡ ಪಾಟೀಲ್ ಎಂಬ ಯುವಕ ಎಂಬಿಎ ಪದವೀಧರನಾಗಿದ್ದರೂ ಯಾವುದೇ ಹಮ್ಮುಬಿಮ್ಮು ಇಲ್ಲದೆ ಹೈನುಗಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.