ರಸ್ತೆ ಬಂದ್ ತೆರವಿಗೆ ಒತ್ತಾಯ: ತಹಶೀಲ್ದಾರರಿಗೆ ರೈತರ ಮನವಿ - ಬೆಳಗಾವಿ ಜಿಲ್ಲೆಯ ನಿಪ್ಪಾಣಿ
ಚಿಕ್ಕೋಡಿ: ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಾಣಿಕೆ ಮಾಡಲು ಸರ್ಕಾರಿ ರಸ್ತೆ ರಿ.ಸಂ 355 ದಲ್ಲಿನ ರೈತರು ರಸ್ತೆಯನ್ನು ಬಂದ್ ಮಾಡಿದ್ದಾರೆ. ಇದರಿಂದ ಕಬ್ಬು ಸಾಗಾಣಿಕೆಗೆ ತೊಂದರೆಯಾಗುತ್ತಿದೆ ಎಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮಾಂಗರ ಗ್ರಾಮದ ರೈತರು ನಿಪ್ಪಾಣಿ ತಹಶೀಲ್ದಾರ್ ಪ್ರಕಾಶ ಗಾಯಕವಾಡ ಅವರಿಗೆ ಮನವಿ ಸಲ್ಲಿಸಿದರು.