ಕರ್ನಾಟಕ

karnataka

ಹಳ್ಳದ ನೀರಿನಲ್ಲಿ ಬೈಕ್ ಸಮೇತ ಕೊಚ್ಚಿ ಹೋಗ್ತಿದ್ದ ಯುವಕ: ಗ್ರಾಮಸ್ಥರಿಂದ ರಕ್ಷಣೆ

By

Published : Oct 14, 2020, 8:07 PM IST

ಕಲಬುರಗಿ ಪ್ರವಾಹದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗ್ತಿದ್ದ ಯುವಕನನ್ನು ರಕ್ಷಿಸಿದ ಘಟನೆ ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಹಳ್ಳ ತುಂಬಿ ಹರಿಯುತ್ತಿರುವ ರಸ್ತೆಯಲ್ಲಿ ಬೈಕ್​ನಲ್ಲಿ ಬರುತ್ತಿದ್ದ ವೇಳೆ ಹಳ್ಳದ ಮಧ್ಯೆ ಬೈಕ್ ಆಫ್ ಆಗಿ ಸವಾರ ಕೊಚ್ಚಿ ಹೋಗ್ತಿದ್ದ. ಇದನ್ನು ಕಂಡ ಗ್ರಾಮಸ್ಥರು ಯುವಕನನ್ನ ಹಗ್ಗದ ಸಹಾಯದಿಂದ ರಕ್ಷಣೆ ಮಾಡಿದ್ದಾರೆ. ಬೈಕನ್ನು ಕೂಡ ಹಗ್ಗದಿಂದ ಮೇಲೆತ್ತಲಾಗಿದೆ. ಮತ್ತೊಂದು ಘಟನೆಯಲ್ಲಿ ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳು ಹಳ್ಳದ ಪ್ರವಾಹದಲ್ಲಿ ಸಿಲುಕಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ನಡೆದಿದೆ. ದಂಡೋತಿ ಮತ್ತು ಮಲಕೋಡ್ ಗ್ರಾ.ಪಂ ಗ್ರಾಮ ಲೆಕ್ಕಾಧಿಕಾರಿಗಳಾದ ನರಸರಡ್ಡಿ ಮತ್ತು ಮಾರುತಿ ಇಬ್ಬರೂ ಹಳ್ಳದ ನೀರಲ್ಲಿ ಸಿಲುಕಿ ಬಚಾವ್​ ಆದ ಘಟನೆ ನಡೆದಿದೆ. ಕಾಗಿಣಾ ನದಿ ಪ್ರವಾಹದ ಹಿನ್ನೆಲೆ ಎಲ್ಲೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ABOUT THE AUTHOR

...view details