ನೆಲಕಚ್ಚಿದ ಮೆಕ್ಕೆಜೋಳ: ಬೆಳೆದ ಅಲ್ಪಸ್ವಲ್ಪ ಬೆಳೆಯೂ ಮಳೆ ಪಾಲು, ಗಡಿಭಾಗದ ರೈತರ ಗೋಳು - ಮೆಕ್ಕೆ ಜೋಳ ಬೆಲೆ ನಷ್ಟ
ಈ ಬಾರಿ ರಾಜ್ಯದಲ್ಲಿ ಸುರಿದ ಭೀಕರ ಮಳೆಯಿಂದ ರೈತರ ಪಾಡು ಹೇಳತೀರದಾಗಿದೆ. ಈ ಹಿಂದೆ ಬೆಳೆದ ಬೆಳೆಗಳೆಲ್ಲಾ ನಷ್ಟವಾಗಿದ್ದು, ಈಗ ಮಕ್ಕೆಜೋಳದ ಬೆಳವಣಿಗೆಯೂ ಕುಂಠಿತವಾಗಿದೆ. ತೆನೆಗಳಿಗೆ ರೋಗ ಬಾಧಿಸಿದ್ರೆ ಇನ್ನು ಕೆಲ ತೆನೆಗಳು ಬೆಳವಣಿಗೆ ಹಂತದಲ್ಲಿಯೇ ಕುಂಠಿತಗೊಂಡಿದೆ. ಹಾಳಾದ ಬೆಳೆಗಳಿಗೆ ಸರ್ಕಾರ ಇದುವರೆಗೂ ಪರಿಹಾರದ ಹಣ ನೀಡಿಲ್ಲ ಎಂದು ಗಡಿಭಾಗದ ರೈತರು ಗೋಳಿಡುತ್ತಿದ್ದಾರೆ.