ಕರ್ನಾಟಕ

karnataka

ಲಾಕ್​ಡೌನ್​ ನಿಯಮ ಗಾಳಿಗೆ ತೂರಿ ಸಂತೆ ನಡೆಸಿದ ಜನ: ಜಿಲ್ಲಾಡಳಿತ ಮಾಡ್ತಿರೋದು ಏನು?

By

Published : Apr 18, 2020, 3:24 PM IST

ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಕಂಡು ಬಂದರೂ ಜನರು ಮಾತ್ರ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಬೇಜವಾಬ್ದಾರಿತನದ ವರ್ತನೆ ತೋರುತ್ತಿದ್ದಾರೆ. ಅಲ್ಲದೇ ಜಂಬಗಿ ಗ್ರಾಮದಲ್ಲಿ ಪೊಲೀಸರ ಎದುರಿಗೇ ಸಂತೆ ನಡೆಸುವ ಮೂಲಕ ಜನ ಸಂದಣಿ ಸೇರಿ ಲಾಕ್​ಡೌನ್​ ನಿಯಮ ಉಲ್ಲಂಘನೆ ಮಾಡಿದ್ದಾರೆ. ಜಿಲ್ಲಾಡಳಿತದ ನಿಯಮ ಮೀರಿ ಸಂತೆಯಲ್ಲಿ ವ್ಯಾಪಾರಸ್ಥರು ಹಾಗೂ ಗ್ರಾಹಕರು ಪಾಲ್ಗೊಂಡಿದ್ದು, ಆಡಳಿತಾಧಿಕಾರಿಗಳ ಸಡಿಲಿಕೆಯನ್ನು ತೋರಿಸುತ್ತಿದೆ.

ABOUT THE AUTHOR

...view details