ಸರ್ಕಾರದ ಯೋಜನೆಗಳು ಇವರಿಗೆ ಮರೀಚಿಕೆ: ಬೀದಿಯಲ್ಲಿ ಜೀವನ ನಡೆಸುವ ದುಸ್ಥಿತಿ
ಗದಗ: ಆತ್ಮ ನಿರ್ಭರ, ಡಿಜಿಟಲ್ ಇಂಡಿಯಾ, ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ, ಮೇಕ್ ಇನ್ ಇಂಡಿಯಾ.... ಹೀಗೆ ಸರ್ಕಾರದ ಹಲವಾರು ಯೋಜನೆಗಳು ಬಡತನ ನಿವಾರಿಸಲು ಹಿಡಿದ ಕೈಗನ್ನಡಿ. ಆದ್ರೆ ಇಂತಹ ದಿನಮಾನದಲ್ಲೂ ಸಹ ಕಿತ್ತು ತಿನ್ನೋ ಬಡತನ, ಮನೆ ಇಲ್ಲದೆ ಬೀದಿಯಲ್ಲಿ ವಾಸ, ಮಕ್ಕಳನ್ನು ಓದಿಸೋಕೂ ಕಷ್ಟ ಪಡಬೇಕಾದ ಅನಿವಾರ್ಯತೆ, ಬೀದಿ ದೀಪದ ಕೆಳಗೆ ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.