ಕರ್ನಾಟಕ

karnataka

ETV Bharat / videos

ಭೂಮಿಯ ಒಳಗೆ ಕುಸಿದು ನಿಂತಿದ್ದ ಟ್ರ್ಯಾಕ್ಟರ್: ನರಗುಂದ ಜನರಲ್ಲಿ ಆತಂಕ - landslide has occurred in the nargund town of gadag district

By

Published : Nov 8, 2019, 7:14 PM IST

ಗದಗ: ಜಿಲ್ಲೆ ನರಗುಂದ ಪಟ್ಟಣದಲ್ಲಿ‌ ಮತ್ತೆ ಭೂಕುಸಿತ ಉಂಟಾಗಿದೆ. ಪಟ್ಟಣದ‌ ಕಸಬಾ ಬಡಾವಣೆಯಲ್ಲಿ ಈ ಘಟನೆ‌ ನಡೆದಿದ್ದು, ಮಹಾಂತೇಶ್ ಗೌಡ ಎನ್ನುವವರ ಟ್ರ್ಯಾಕ್ಟರ್ ನಿಂತ ಜಾಗದಲ್ಲೇ ಭೂಕುಸಿತ ಉಂಟಾಗಿದೆ. ಸುಮಾರು 10 ಅಡಿಗೂ ಹೆಚ್ಚು ಭೂಕುಸಿತ ಉಂಟಾದ ಪರಿಣಾಮ ಟ್ರ್ಯಾಕ್ಟರ್ ಭೂಮಿಯ ಒಳಗಿಳಿದಿದೆ. ತಕ್ಷಣವೇ ವಿಷಯ ತಿಳಿದ ಪುರಸಭೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಜೆಸಿಬಿ ಸಹಾಯದಿಂದ ಟ್ರ್ಯಾಕ್ಟರ್ ಮೇಲೆತ್ತಿದ್ದಾರೆ. ಪದೇ ಪದೇ ಈ ಬಗೆಯ ಘಟನೆ ಉಂಟಾಗ್ತಿರೋದ್ರಿಂದ ನರಗುಂದ ಪಟ್ಟಣದ‌ ಜನತೆ ಆತಂಕದಲ್ಲಿದ್ದಾರೆ.

For All Latest Updates

ABOUT THE AUTHOR

...view details