ಬಿಜೆಪಿ ಭರ್ಜರಿ ಗೆಲುವು: ಕುಂದಾ ನಗರಿಯನ್ನು ಕೇಸರಿಯಲ್ಲಿ ಮುಳುಗಿಸಿದ ಶಾಸಕ - undefined
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಬಿಜೆಪಿ ಗೆಲುವಿನ ಸಂತಸದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಕೇಸರಿ ಗುಲಾಲ್ ಎರಚಿ ಸಂತಸ ವ್ಯಕ್ತಪಡಿಸಿದರು. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಸುರೇಶ್ ಅಂಗಡಿ ಅವರೊಂದಿಗೆ ಮತಗಟ್ಟೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಘೋಷಣೆಗೆ ಶಾಸಕ ಧ್ವನಿಗೂಡಿಸಿದರು. ಬಳಿಕ ಅಲ್ಲಿಯೇ ಇದ್ದ ಕೇಸರಿ ಬಣ್ಣವನ್ನು ಜನರಿಗೆ ಹಚ್ಚುವ ಮೂಲಕ ಮೋದಿಗೆ ಜೈ ಅಂದ್ರು.