ಕರ್ನಾಟಕ

karnataka

By

Published : Jul 2, 2020, 5:23 AM IST

ETV Bharat / videos

ಕೊರೊನಾ ಆರ್ಭಟದ ಮಧ್ಯೆಯೂ ಇಂದು ಡಿಜಿಟಲ್‌ ರೂಪದಲ್ಲಿ ಡಿಕೆಶಿ ಅದ್ಧೂರಿ ಪದಗ್ರಹಣ

ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಹಾಗೂ ಸಲೀಂ ಅಹಮದ್ ಅವರ ಬಹು ನಿರೀಕ್ಷಿತ ಪದಗ್ರಹಣದ ಪ್ರತಿಜ್ಞಾವಿಧಿ ಕಾರ್ಯಕ್ರಮ ಇಂದು (ಗುರುವಾರ) ಬೆಳಗ್ಗೆ 10.30ರಂದು ಅದ್ಧೂರಿಯಾಗಿ ನಡೆಯಲಿದೆ. ದೇಶ ಸೇರಿದಂತೆ ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿರುವ ಸಂದರ್ಭದಲ್ಲಿ ಇಂಥದೊಂದು ಸಮಾರಂಭ ಆಯೋಜಿಸುವ ಮೂಲಕ ಕಾಂಗ್ರೆಸ್​ ತನ್ನ ಶಕ್ತಿಪ್ರದರ್ಶನಕ್ಕೆ ಮುಂದಾಗಿದೆ. ಅಪಾರ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಮತ್ತೊಮ್ಮೆ ಕುಖ್ಯಾತಿಗೆ ಪಾತ್ರವಾಗುತ್ತದೆಯಾ ಎಂಬ ಅನುಮಾನ ಕಾಡುತ್ತಿದೆ.

ABOUT THE AUTHOR

...view details