ಗಣಿನಾಡಿನಲ್ಲಿ ಕನ್ನಡ ರಾಜ್ಯೋತ್ಸವ ಸಡಗರ: ಸರ್ಕಾರಿ ಇಲಾಖೆಗಳಿಂದ ಸ್ತಬ್ಧ ಚಿತ್ರಗಳ ಮೆರವಣಿಗೆ - Kannada Rajyotsava-2019
ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಸರ್ಕಾರಿ ಇಲಾಖೆಗಳ ಮೂಲಕ ಸ್ತಬ್ಧ ಚಿತ್ರದ ಮೆರವಣಿಗೆ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿವ ಕಾರ್ಯ ನಡೆಸಿತು. ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆ ಮೂಲಕ ಸಾರ್ವಜನಿಕರಿಗೆ ಬ್ಯಾನರ್ಗಳ ಮೂಲಕ ಜಾಗೃತಿ, ಅರಣ್ಯ ಇಲಾಖೆಯಿಂದ ಪರಿಸರ ರಕ್ಷಣೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜನರು ಆರೋಗ್ಯ ಬಗ್ಗೆ ಜಾಗೃತಿ, ಪುರಾತತ್ವ ಇಲಾಖೆಯಿಂದ ಬಳ್ಳಾರಿ ಏಕಶಿಲಾ ಬೆಟ್ಟ ಪ್ರದರ್ಶನ, ಕೃಷಿ ಇಲಾಖೆಯಿಂದ ಕುರಿ ಸಾಗಣೆ ಸಹಾಯಧನ ಬಗ್ಗೆ ಸ್ತಬ್ಧ ಚಿತ್ರಗಳ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.