ತೆನೆ ಬಿಟ್ಟು ಕಮಲ ಅರಳಿಸಿದ ಕೆ.ಗೋಪಾಲಯ್ಯ.. ಜೆಡಿಎಸ್ ಕೋಟೆ ಬಿಜೆಪಿ ತೆಕ್ಕೆಗೆ! - ಕರ್ನಾಟಕ ಉಪಚುನಾವಣೆ ಸುದ್ದಿ
ಜೆಡಿಎಸ್ನ ಭದ್ರಕೋಟೆಯೆನಿಸಿದ ಮಹಾಲಕ್ಷ್ಮಿಲೇಔಟ್ನಲ್ಲಿ ಕಮಲ ಅರಳಿದೆ. ಅನರ್ಹ ಶಾಸಕರೆನಿಸಿ ಬಿಜೆಪಿಯಿಂದ ಕಣಕ್ಕಿಳಿದ ಗೋಪಾಲಯ್ಯ ಜಯಭೇರಿ ಬಾರಿಸಿದ್ದು, ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ನ ಗಿರೀಶ್ ನಾಶಿ ಹಾಗೂ ಕಾಂಗ್ರೆಸ್ನ ಎಂ.ಶಿವರಾಜ್ ವಿರುದ್ಧ ಸುಮಾರು 43 ಸಾವಿರಕ್ಕೂ ಹೆಚ್ಚು ಮತಗಳ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.