ಪದ್ಮಶ್ರೀ ಪುರಸ್ಕೃತ ’ಸಂಸ್ಕೃತ ಸುಧರ್ಮಾ ದಂಪತಿಗಳ’ ಮನದಾಳದ ಮಾತುಗಳಿವು! - Interview of Sudharma couple.
ಮೈಸೂರು: ಕಳೆದ 50 ವರ್ಷಗಳ ಹಿಂದೆ ಸಾಂಸ್ಕೃತಿಕ ನಗರಿಯಲ್ಲಿ ಸುಧರ್ಮಾ ಸಂಸ್ಕೃತ ದಿನಪತ್ರಿಕೆಯನ್ನು ಪ್ರಾರಂಭಿಸಿದ ಕೆ.ಎನ್. ಸಂಪತ್ ಕುಮಾರ್ ಹಾಗೂ ಅವರ ಪತ್ನಿ ಜಯಲಕ್ಷ್ಮಿ ಇಂದಿಗೂ ಸಹ ಹಲವು ಅಡೆತಡೆಗಳನ್ನು ಮೀರಿ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ನಿತ್ಯ ಅಂಚೆಯ ಮೂಲಕ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹಲವು ಓದುಗರನ್ನು ಈ ಪತ್ರಿಕೆ ತಲುಪುತ್ತದೆ. ಇಂತಹಾ ಪತ್ರಿಕೆಯನ್ನು ಪ್ರಾರಂಭಿಸಿದ ದಂಪತಿಗೆ ಈ ಬಾರಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಬಗ್ಗೆ ಪ್ರಶಸ್ತಿ ಪುರಸ್ಕೃತರು ತಮ್ಮ ಮನದಾಳದ ಮಾತನ್ನು ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದು ಹೀಗೆ.