ಕರ್ನಾಟಕ

karnataka

ಜ್ಞಾನಭಾರತಿ ವಾರ್ಡ್​ನಲ್ಲಿ ಮತದಾನಕ್ಕೆ ಆರಂಭದಲ್ಲೇ ನೀರಸ ಪ್ರತಿಕ್ರಿಯೆ

By

Published : Nov 3, 2020, 7:30 AM IST

Published : Nov 3, 2020, 7:30 AM IST

ಬೆಂಗಳೂರು: ಇಂದು ಆರ್​ಆರ್​ ನಗರದಲ್ಲಿ ಉಪಚುನಾವಣೆ ಮತದಾನ ನಡೆಯುತ್ತಿದ್ದು, ಜ್ಞಾನಭಾರತಿ ವಾರ್ಡ್ ನ ಕನ್ಯಾಕುಮಾರಿ ಶಾಲೆಯ ಮತಗಟ್ಟೆಯಲ್ಲಿ 7 ಗಂಟೆಯಾದರೂ ಮತದಾರರು ಮತಗಟ್ಟೆಯತ್ತ ಸುಳಿದಿಲ್ಲ. ಮತದಾನಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡು ಮತಗಟ್ಟೆ ಅಧಿಕಾರಿಗಳು ಮತದಾರರಿಗಾಗಿ ಕಾಯುತ್ತಿದ್ದಾರೆ. ಪೊಲೀಸರು, ಪ್ಯಾರಾ ಮಿಲಿಟರಿ ಫೋರ್ಸ್, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಕೋವಿಡ್ ಸಿಬ್ಬಂದಿ, ಮತಗಟ್ಟೆ ಅಧಿಕಾರಿಗಳು, ಮತಗಟ್ಟೆ ಏಜೆಂಟ್ ಸೇರಿದಂತೆ ನೂರಾರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತದಾರರಿಗಾಗಿ ಕಾಯುತ್ತಿದ್ದಾರೆ. ಆದರೆ ಈವರೆಗೂ ಒಬ್ಬೇ ಒಬ್ಬ ಮತದಾರರೂ ಮತ ಚಲಾಯಿಸಲು ಬಂದಿಲ್ಲ.

ABOUT THE AUTHOR

...view details