ವರದಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ; ಮನೆಯಿಲ್ಲದೆ ಬೀದಿಪಾಲದ ಗ್ರಾಮಸ್ಥರು - ಮನೆ-ಮಠ ಕಳೆದುಕೊಂಡ ಗ್ರಾಮಸ್ಥರು
ವರದಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿರುವ ಪರಿಣಾಮ ಜಿಲ್ಲೆಯ ಹಾನಗಲ್ ತಾಲೂಕಿನ ಶಾಡಗುಪ್ಪಿ, ವರ್ದಿ, ಹರವಿ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜೊತೆಗೆ ಗ್ರಾಮದ ಮನೆಗಳಿಗೆ ನುಗ್ಗಿದ್ದು, ಗ್ರಾಮಸ್ಥರು ಮನೆ-ಮಠ ಕಳೆದುಕೊಂಡು, ಮುಂದಿನ ಬದುಕಿಗಾಗಿ ಅಧಿಕಾರಿಗಳ ದಾರಿ ನೋಡುತ್ತಾ ಕಾಯುತ್ತಿದ್ದಾರೆ.