ಮೈಸೂರು: ಚಾಮುಂಡೇಶ್ವರಿ ಸನ್ನಿದಾನದಲ್ಲಿ ನಾನು ಹೇಳಿರುವುದು ಸತ್ಯ, ನನ್ನ ಹೇಳಿಕೆಗೆ ಈಗಲೂ ಬದ್ದ. ಇನ್ನು ಎಲ್ಲವೂ ಚಾಮುಂಡಿ ತಾಯಿಗೆ ಬಿಟ್ಟಿದ್ದು ಎಂದು ಸಾ.ರಾ.ಮಹೇಶ್ ಹೇಳಿದರು. ಅನರ್ಹ ಶಾಸಕ ವಿಶ್ವನಾಥ್ 25 ಕೋಟಿಗೆ ತಮ್ಮನ್ನು ತಾವು ಮಾರಿ ಕೊಂಡಿದ್ದಾರೆ ಎಂಬ ಹೇಳಿಕೆಗೆ ಸಂಬಂಧಪಟ್ಟಂತೆ ಚಾಮುಂಡಿ ಬೆಟ್ಟದಲ್ಲಿ ಪ್ರತಿಕ್ರಿಯಿಸಿದರು.