ಕರ್ನಾಟಕ

karnataka

By

Published : Oct 15, 2020, 4:20 PM IST

ETV Bharat / videos

ಸತತ ಮಳೆಯಿಂದ ಕುಸಿದು ಬಿದ್ದ ಮನೆ; ವೃದ್ಧೆಯ ರಕ್ಷಣೆ

ಧಾರವಾಡ (ಅಣ್ಣಿಗೇರಿ): ಜಿಲ್ಲೆ ಸೇರಿದಂತೆ ಹಲವೆಡೆ ಭಾರಿ ಮಳೆ ಸುರಿದಿದೆ. ಪರಿಣಾಮ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾದ ವರದಿಯಾಗಿದೆ. ಸತತ ಮಳೆಯಿಂದ ಅಣ್ಣಿಗೇರಿ ಪಟ್ಟಣದ ಹೊರಕೇರಿ ಓಣಿಯಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು ಮನೆಯಲ್ಲಿ ಸಿಲುಕಿದ್ದ ವೃದ್ಧೆಯೋರ್ವಳನ್ನು ಸ್ಥಳೀಯರು ರಕ್ಷಿಸಿ ಹೊರತಂದಿದ್ದಾರೆ. ಘಟನೆಯಲ್ಲಿ ವೃದ್ಧೆ ಶಾರಮ್ಮ ಗೌಡರ್​​​ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ABOUT THE AUTHOR

...view details