ಕರ್ನಾಟಕ

karnataka

By

Published : Dec 20, 2020, 7:36 AM IST

Updated : Dec 20, 2020, 7:44 AM IST

ETV Bharat / videos

ಜನವರಿಯಲ್ಲಿ ಶಾಲಾ-ಕಾಲೇಜು ಪುನಾರಂಭ ಬೇಡ : ಸುಬುಧೇಂದ್ರ ತೀರ್ಥರು

ಡಿಸೆಂಬರ್-ಜನವರಿ ತಿಂಗಳ ಮಧ್ಯ ಚಳಿಗಾಲದ ಸಮಯದಲ್ಲಿ ಕೊರೊನಾ ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಜ.1ರಿಂದ ಶಾಲಾ-ಕಾಲೇಜುಗಳನ್ನು ಪುನಾರಂಭಿಸುವುದು ಬೇಡ ಬೇಡ ಎಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ. ಮಂತ್ರಾಲಯದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು. ಎರಡನೇ ಹಂತದಲ್ಲಿ ಕೊರೊನಾ ಹರಡುವ ಭೀತಿಯಿದ್ದು, ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಚಳಿ ಇರುವುದರಿಂದ ವೈರಸ್ ಆತಂಕ ಹೆಚ್ಚಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತೊಮ್ಮೆ ಆರೋಗ್ಯ ಇಲಾಖೆ, ತಜ್ಞರ ಅಭಿಪ್ರಾಯ ಪಡೆದು, ಈ ಕುರಿತಂತೆ ಮರು ಪರಿಶೀಲನೆ ಮಾಡಬೇಕೆಂದರು. ಇದೇ ವೇಳೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ಶ್ರೀಗಳು ಬೆಂಬಲಿಸಿದರು.
Last Updated : Dec 20, 2020, 7:44 AM IST

For All Latest Updates

ABOUT THE AUTHOR

...view details