ಕೊರೊನಾ ವೈರಸ್ ಸೋಂಕು ತಡೆಗೆ ಹೈ- ಅಲರ್ಟ್: ನೆರೆ ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ಹದ್ದಿನಕಣ್ಣು - ಕೊರೊನಾ ವೈರಸ್ ಸೋಂಕು
ಕೊರೊನಾ ಸೋಂಕು ಹರಡದಂತೆ ತಡೆಯಲು ಬೀದರ್ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದ್ದು. ಜಿಲ್ಲೆಯ ಗಡಿ ಭಾಗದಲ್ಲಿ ನೆರೆ ರಾಜ್ಯಗಳಿಂದ ಬರುವ ಜನರ ಮೇಲೆ ತೀವ್ರ ನಿಗಾ ವಹಿಸಿದ್ದು ತಾತ್ಕಾಲಿಕ ಆರೋಗ್ಯ ಇಲಾಖೆ ಚೆಕ್ ಪೊಸ್ಟ್ಗಳನ್ನು ನಿರ್ಮಿಸಿ ಪ್ರತಿಯೊಬ್ಬ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗ್ತಿದೆ. ಅಲ್ಲದೆ ಕೆಮ್ಮು, ನೆಗಡಿ, ಜ್ವರ ಹಾಗೂ ಗಂಟಲು ನೋವು ವ್ಯಕ್ತಪಡಿಸಿದ ಶಂಕಿತರ ಪಟ್ಟಿ ತಯಾರಿಸಿ ಅವರನ್ನು ಕೊರೊನಾ ವಾರ್ಡ್ಗೆ ಶಿಫ್ಟ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ.