ಕರ್ನಾಟಕ

karnataka

ETV Bharat / videos

'ಹೆಲ್ಮೆಟ್ ಬಳಸಿ, ಪ್ರಾಣ ಉಳಿಸಿ'...ಇದು ಚಿತ್ರದುರ್ಗ ಪೊಲೀಸರ ಮನವಿ - Helmet awareness at Chitradurga

By

Published : Mar 4, 2020, 1:22 PM IST

ಚಿತ್ರದುರ್ಗ: 'ಹೆಲ್ಮೆಟ್ ಬಳಸಿ, ಪ್ರಾಣ ಉಳಿಸಿ' ಎಂಬ ಘೋಷವಾಕ್ಯದಡಿ ಸಂಚಾರ ಪೊಲೀಸರು ಜಾಗೃತಿ ನಡೆಸಿದರು. ನಗರದ ಗಾಂಧಿ ವೃತ್ತದಿಂದ ಆರಂಭವಾದ ಜಾಗೃತಿ ಜಾಥಕ್ಕೆ ಡಿವೈಎಸ್ಪಿ ಪಾಂಡುರಂಗ ಚಾಲನೆ ನೀಡಿದರು. ಬಳಿಕ ಸಂಚಾರ ಪೊಲೀಸ್​ ಠಾಣೆಯ ಪಿಎಸ್ಐ ರೇವತಿ ನೇತೃತ್ವದಲ್ಲಿ ನಗರದ ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಡಿಸಿ ವೃತ್ತದ ಮೂಲಕ ಸಾಗಿ ಬಂದ ಜಾಥಾ ಬಿಡಿ ರಸ್ತೆಯಲ್ಲಿ ಸಮಾಪ್ತಿಗೊಂಡಿತು. ಪೊಲೀಸ್​ ಸಿಬ್ಬಂದಿ ಹೆಲ್ಮೆಟ್​ ಧರಿಸಿ ಬೈಕ್​ ಓಡಿಸುವ ಮೂಲಕ ಜಾಥಾದಲ್ಲಿ ಪಾಲ್ಗೊಂಡರು.

ABOUT THE AUTHOR

...view details